Slide
Slide
Slide
previous arrow
next arrow

ಅರಣ್ಯವಾಸಿಗಳನ್ನು ಒಕ್ಕಲೆಬ್ಬಿಸಲು ಜಿಪಿಎಸ್ ಮಾನದಂಡ ಅಲ್ಲ: ಡಿಎಫ್‌ಓ

300x250 AD

ಹೊನ್ನಾವರ: ಅರಣ್ಯವಾಸಿಗಳನ್ನು ಒಕ್ಕಲೆಬ್ಬಿಸುವಲ್ಲಿ ಜಿಪಿಎಸ್ ಮಾನದಂಡವಲ್ಲ. ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಅರ್ಜಿ ಸಲ್ಲಿಸಿದ ಸಾಗುವಳಿ ಕ್ಷೇತ್ರ ಅರಣ್ಯವಾಸಿಗಳು ಅನುಭವಿಸಲು ಅರಣ್ಯ ಇಲಾಖೆಯು ಯಾವುದೇ ಆತಂಕವಾಗಲೀ, ಒಕ್ಕಲೆಬ್ಬಿಸುವ ಪ್ರಕ್ರಿಯೆ ಜರುಗಿಸುವುದಿಲ್ಲ. ಕಾನೂನು ಬಾಹಿರವಾಗಿ ಒಕ್ಕಲೆಬ್ಬಿಸಿದ್ದಲ್ಲಿ ಹಿರಿಯ ಅಧಿಕಾರಿಗಳ ಗಮನಕ್ಕೆ ತನ್ನಿ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ರವಿಶಂಕರ್ ಹೇಳಿದರು.

ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಅವರ ನೇತೃತ್ವದಲ್ಲಿ ತಾಲೂಕಿನ ಗೇರುಸೊಪ್ಪ ವಲಯದ ಅರಣ್ಯವಾಸಿಗಳೊಂದಿಗೆ ಅರಣ್ಯವಾಸಿಗಳ ಸಮಸ್ಯೆಗಳ ಕುರಿತು ಬೃಹತ್ ಸಂಖ್ಯೆಯಲ್ಲಿ ಸೇರಿದ ಅರಣ್ಯವಾಸಿಗಳ ಸಭೆಯ ಚರ್ಚೆಯ ಸಂದರ್ಭದಲ್ಲಿ ಅವರು ಹೇಳಿದರು. ಅರಣ್ಯವಾಸಿಗಳ ಮೇಲೆ ಕಾನೂನು ಬಾಹಿರವಾಗಿ ದೌರ್ಜನ್ಯ, ಕಿರುಕುಳ, ಕಾನೂನು ಬಾಹಿರ ಕೃತ್ಯವನ್ನು ಅರಣ್ಯ ಸಿಬ್ಬಂದಿಗಳಿಂದ ಜರುಗಿದ್ದಲ್ಲಿ ಅಂತಹ ಸಿಬ್ಬಂದಿಗಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುವುದಾಗಿ ಅವರು ಅರಣ್ಯವಾಸಿಗಳಿಗೆ ಭರವಸೆ ನೀಡಿದರು.

ಅರಣ್ಯವಾಸಿಗಳ ತೀವ್ರ ಆಕ್ರೋಶ: ಪದೇ ಪದೇ ಅರಣ್ಯ ಸಿಬ್ಬಂದಿಗಳು ಅರಣ್ಯವಾಸಿಗಳ ಸಾಗುವಳಿಗೆ, ಮನೆ ರಿಪೇರಿಗೆ, ಬಿದ್ದಿರುವಂತಹ ಮನೆಗಳ ನಿರ್ಮಾಣಕ್ಕೆ ಅರಣ್ಯ ಸಿಬ್ಬಂದಿಗಳು ನೀಡುತ್ತಿರುವ ದೌರ್ಜನ್ಯ, ಕಿರುಕುಳ, ಮಾನಸಿಕ ಹಿಂಸೆಯ ವಿರುದ್ದ ತೀವ್ರ ಆಕ್ರೋಶ ವ್ಯಕ್ತಪಡಿಸಿ, ದೌರ್ಜನ್ಯ ವೆಸಗಿದ ಛಾಯಾಚಿತ್ರ ಮತ್ತು ವಿಡಿಯೋಗಳ ಮೂಲಕ ಡಿಎಫ್‌ಒ ಅವರ ಗಮನಕ್ಕೆ ತರಲಾಯಿತು.

ಅರಣ್ಯ ಸಿಬ್ಬಂದಿಗಳಿಗೆ ರವೀಂದ್ರ ನಾಯ್ಕ ಪಾಠ: ಕಾನೂನು ವ್ಯತಿರಿಕ್ತವಾಗಿ ಅರಣ್ಯಾಧಿಕಾರಿಗಳ ನಡವಳಿಕೆಯನ್ನ ಪ್ರಶ್ನಿಸುತ್ತಾ ಅಧ್ಯಕ್ಷ ರವೀಂದ್ರ ನಾಯ್ಕ ಕಾನೂನು ವ್ಯತಿರಿಕ್ತವಾಗಿ ಅರಣ್ಯ ಸಿಬ್ಬಂದಿಗಳ ಮೇಲಿನ ಕೃತ್ಯವನ್ನ ಕಾನೂನು ಪ್ರಸ್ತಾಪಿಸುತ್ತಾ, ಕೇಂದ್ರ ಮತ್ತು ರಾಜ್ಯ ಸರಕಾರದ ಆದೇಶವನ್ನು ಉಲ್ಲೇಖಿಸುತ್ತಾ, ಅರಣ್ಯ ಸಿಬ್ಬಂದಿಗಳ ಕಾನೂನು ಅಜ್ಞಾನದ ಕುರಿತು ಸಭೆಗೆ ಪ್ರಸ್ತುತ ಪಡಿಸಿ, ಅರಣ್ಯ ಸಿಬ್ಬಂದಿಗಳಿಗೆ ಅವರು ಕಾನೂನು ಪಾಠ ಮಾಡಿರುವುದು ಚರ್ಚೆಯ ಸಂದರ್ಭದಲ್ಲಿ ವಿಶೇಷವಾಗಿತ್ತು.

300x250 AD

ತಾಲೂಕ ಅಧ್ಯಕ್ಷ ಚಂದ್ರಕಾಂತ ಕೊಚರೆಕರ ಪ್ರಾಸ್ತಾವಿಕ ಮಾತನಾಡುತ್ತಾ, ಅರಣ್ಯ ಸಿಬ್ಬಂದಿಗಳಿಂದ ಉಂಟಾಗುತ್ತಿರುವ ವಿವಿಧ ದೌರ್ಜನ್ಯದ ಘಟನೆಗಳನ್ನ ಸಭೆಯ ಗಮನಕ್ಕೆ ತಂದರು. ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಗೋವಿಂದ ನಾಯ್ಕ ಮಾತನಾಡುತ್ತಾ ಅರಣ್ಯ ಅಧಿಕಾರಿಗಳು ಅರಣ್ಯವಾಸಿಗಳೊಂದಿಗೆ ಸೌಜನ್ಯದಿಂದ ಮಾತನಾಡುವ ಮನೋಪ್ರವೃತ್ತಿ ಬೆಳೆಸಿಕೊಳ್ಳಬೇಕೆಂದು ಹೇಳಿದರು.

ಸಭೆಯನ್ನು ಉದ್ದೇಶಿಸಿ ಹಿರಿಯ ಧುರಿಣರಾದ ಪಿಟಿ ನಾಯ್ಕ, ಯೋಗೇಶ್ ನಾಯ್ಕ ಮಾತನಾಡಿದರು. ಜಿಲ್ಲಾ ಸಂಚಾಲಕರಾದ ರಾಮಾ ಮರಾಠಿ, ಸುರೇಶ್ ನಾಯ್ಕ ನಗರಬಸ್ತಿಕೇರಿ, ಮಹೇಶ ನಾಯ್ಕ ಸಾಲ್ಕೋಡ್, ವಿನೋಧ ನಾಯ್ಕ ಯಲಕೊಟಗಿ, ಸಂಕೇತ ನಾಯ್ಕ ಯಲಕೊಟಗಿ, ಅಪಸಾನ ಸರಳಗಿ, ಶೇಷಗಿರಿ ನಾಯ್ಕ ಯಲಕೊಟಗಿ, ಮಂಜುನಾಥ ಗೌಡ, ಸುರೇಶ್ ನಾಯ್ಕ ತುಂಬೊಳ್ಳಿ ಸಭೆಯ ನೇತ್ರತ್ವವನ್ನ ವಹಿಸಿದ್ದರು. ಸಭೆಯಲ್ಲಿ ಮಾಭ್ಲೇಶ್ವರ ನಾಯ್ಕ ಬೇಡ್ಕಣಿ, ರವಿ ನಾಯ್ಕ ಹಂಜಗಿ, ಭಾಸ್ಕರ್ ನಾಯ್ಕ ಮುಗದೂರು, ಜಿಬಿ ನಾಯ್ಕ, ಸುಧಾಕರ ಮಡಿವಾಳ ಬಿಳಗಿ, ಗೋವಿಂದ ನಾಯ್ಕ ತಿಳವಳ್ಳಿ ಮುಂತಾದವರು ಉಪಸ್ಥಿತರಿದ್ದರು. ಸಭೆಯಲ್ಲಿ ಎಸಿಎಫ್ ಎಸ್.ಎಸ್ ಲಿಂಗಾಣಿ, ಆರ್.ಎಫ್.ಓ ಪ್ರೀತಿ ನಾಯ್ಕ, ಉಪಸ್ಥಿತರಿದ್ದರು. ಪಿ.ಎಸ್.ಐ ಮಹಂತೇಶ್ ನೇತೃತ್ವದಲ್ಲಿ 50ಕ್ಕೂ ಮಿಕ್ಕಿ ಪೊಲೀಸರಿಂದ ಬಿಗಿ ಬಂದೋಬಸ್ತ್ ಜರುಗಿಸಲಾಗಿತ್ತು.

Share This
300x250 AD
300x250 AD
300x250 AD
Back to top